Showing posts with label Kannada Poem. Show all posts
Showing posts with label Kannada Poem. Show all posts

Saturday, September 22, 2012

ವಯಸ್ಸಿನ ಮನಸ್ಸು

ಮನಸ್ಸು ಚಂಚಲವೆಂದು ನಾ ಹೀಗಾದೆನೋ?
ನಾನೇ ಹೀಗೆಂದು ಮನಸ್ಸು ಚಂಚಲವಾಯಿತೋ?
ಪ್ರೀತಿಯ ಮರದಲ್ಲಿ ಮಂಗನಂತಾಗಿರುವೆ ನಾನು
ಈ ಕೊಂಬೆಯೂ ಚೆಂದ, ಆ ಕೊಂಬೆಯೂ ಅಂದ


ಹೂಬನದಿ ಮರುಳಾದ ದುಂಭಿ ನಾನು
ಯಾವ ಹೂವನು ತೊರೆದು, ಯಾವುದನು ಚುಂಬಿಸಲಿ
ಮಲ್ಲಿಗೆಯ ಅಪ್ಪಿದರೆ ಸಂಪಿಗೆಗೆ ಕೋಪ
ಎರಡೂ ಸಿಕ್ಕರೆ, ನನಗೆ ಸೇವಂತಿಯದೇ ಙ್ಞಾಪಕ


ಹರೆಯವ ರೂಪಿಸುವುದ ಪ್ರಕೃತಿಗೆ ಬಿಟ್ಟೆ
ಹರೆಯದಿ ಮನಸ್ಸು ಮಾತ್ರ ಮಗುವಿನಂತೆ ಇಟ್ಟೆ
ಅಂಗಡಿಯಲಿ ನಾಲ್ಕಾಣೆ ಹಿಡಿದ ಮಗುವಿನಂತೆ ನಾನು
ಎಟುಕಲಿ-ಇರದಿರಲಿ, ಎಲ್ಲ ತಿಂಡಿಯನೂ ಸವಿಯುವಾಸೆ


ತಿಳಿಯದ ಈ ಮನಸ್ಸಿಗೆ, ಕಬ್ಬಿಣವ ತುಂಬಿದೆ
ಅಯಸ್ಕಾಂತದಂತೆ ಚೆಲುವೆಯರ ಎಲ್ಲೆಲ್ಲೂ ಸೃಷ್ಟಿಸಿದೆ
ಯಾರನ್ನು ಅಪ್ಪಲಿ, ಯಾರಿಂದ ದೂರವಿರಲಿ
ವಯಸ್ಸಿನ ಮನಸ್ಸಿಗೆ ಎಲ್ಲವೂ ಆಕರ್ಷಕವೆ !


ಎಲ್ಲರನೂ ಸಮನಾಗಿ ನೀ ಸೃಷ್ಟಿಸಿ ಸಿಂಗರಿಸಿರುವಾಗ
ಒಬ್ಬಳು ಸರಿಯೆಂದು ಮತ್ತೊಬ್ಬಳ ಬಿಡುವುದು ಸರಿಯೇ?
ಎಲ್ಲರಿಗೂ ಪ್ರೀತಿ ಹಂಚಿರೆಂದು ನೀ ಸಾರುವಾಗ
ನಿನ್ನ ಭಕ್ತನಾದ ನಾನು, ಭೇದ ಮಾಡುವುದು ಸರಿಯೇ?


ಉರಿಯುವ ದೀಪಕ್ಕೆ ಕತ್ತಲೆಯಲ್ಲಿ ಭೇದ ಕಾಣದು
ಗುಡಿಗೂ ಅಲಂಕಾರವೇ, ಮಸಣಕ್ಕೂ ದಾರಿದೀಪವೇ,
ನನ್ನೀ ಮನಸ್ಸಿನ ಬತ್ತಿಗೆ, ನೀ ಪ್ರೀತಿ ಹಚ್ಚಿದಾಗ
ಒಬ್ಬಳೆಡೆಗೆ ಮಾತ್ರ ಬೆಳಕನ್ನು ಚೆಲ್ಲುವುದು ಸರಿಯೇ?


ಪ್ರೀತಿಯ ಜಾತ್ರೆಯಲ್ಲಿ ದಾರಿ ತಪ್ಪಿದ ಬಾಲಕ ನಾನು
ನನ್ನ ಕೈ ಹಿಡಿದು ನೀ ನಡೆಸು ಮುಂದೆ,
ಸಾವಿರದ ಲೆಕ್ಕದಲಿ ಸರಸವಾಡಿದವನು ನೀನು
ಒಂದೆರಡು ಪಾಠವ ನನಗೂ ಕಲಿಸಿಕೊಡು ತಂದೆ !!

ಆಸೆ

ನಿನ್ನ ಬೆರಳುಗಳ ಕಂಡಾಗ , ವೀಣೆಯಾಗುವ ಬಯಕೆ
ಪ್ರೀತಿಯಿಂದ ಎನ್ನ ನೀನು ನುಡಿಸಬಾರದೇಕೆ ?
ಬಹುದಿನದಿ ಮನದಲ್ಲೇ ಕೂಡಿಟ್ಟ ಬಯಕೆಗಳ
ಪ್ರೇಮರಾಗದಿ ನಿನಗೆ ಅರ್ಪಿಸುವ ಆಸೆ

ಕಂಗಳ ಕಂಡಾಗ ಕನಸಾಗುವ ಆಸೆ
ರೆಪ್ಪೆಗಳ ಅಂಚಿನಲ್ಲೇ ಜೀವ ಕಳೆಯುವ ಆಸೆ
ನೀ ಪ್ರತಿಬಾರಿ ಮೈಮರೆತು ಕುಂತಾಗಲೂ
ಸುಂದರ ಜಗವೊಂದನು ನಿನಗಾಗಿ ಹೆಣೆಯುವ ಆಸೆ

ತುಟಿಗಳ ಕಂಡಾಗ ಹೂವಾಗುವ ಬಯಕೆ
ಸೊಂಪಾದ ಪರಿಮಳದಿ ನಿನ್ನ ತೇಲಿಸುವ ಆಸೆ
ಒಂದೇ ದಿನದಿ ಬದುಕಿ ಬಾಡಿದರೆನು
ನೀ ನಕ್ಕು ಚುಂಬಿಸಲು, ನಾ ಪ್ರತಿದಿನ ಸಾಯಲೂ ಸರಿಯೆ

ಬಳುಕುವ ಸೊಂಟವ ಕಂಡಾಗ ಬಿಂದಿಗೆಯಾಗುವ ಆಸೆ
ಊರೆಲ್ಲಾ ನಿನ್ನೊಡನೆ ಕುಲುಕುತ ನಡೆಯುವ ಆಸೆ
ಎನ್ನ ನೀ ಬಿಗಿದಪ್ಪಿ ನಡೆಯುವ ಅನುಭವಕೆ
ಜೀವನವೆಲ್ಲಾ ಜೀವವಿಲ್ಲದೆ ಇದ್ದರೂ ಸರಿಯೆ!

ನಿನ್ನ ಪ್ರತಿಸಾರಿ ಕಂಡಾಗಲೂ ಎನಾದರೊಂದಾಗುವಾಸೆ
ಸದಾ ನಿನ್ನೊಡನೆ ನೆರಳಂತೆ ಇರುವಾಸೆ
ನನ್ನ ಜಗವೆಲ್ಲಾ ನಿನ್ನದೇ ಬಿಂಭವಾಗಿರುವಾಗ
ನಿನ್ನ ಮನದೊಳಗೆ ನನಗೊಂದು ಪುಟ್ಟ ಜಾಗ ಕೊಡಬಾರದೇಕೆ?

Thursday, September 13, 2012

ಬಿಳಿ ಕೂದಲು

ಕಾರ್ಮೋಡಗಳ ನಡುವೆ ಮಿಂಚೊಂದು ಹರಿದಂತೆ
ಬಿಳಿಯ ಕೂದಲೊಂದು ಎದ್ದು ಕಾಣುತಿದೆ
ಜೀವನದ ಮಧುರವಾದ ಘಟ್ಟವು ಮುಗಿಯಿತೆಂದು
ಕಾಲವು ತನ್ನದೇ ರೀತಿಯಲ್ಲಿ ಸೂಚಿಸುತಿದೆ

ನನ್ನ ಮನಸನ್ನೇ ಪ್ರತಿಬಿಂಭಿಸುತ್ತಿದ್ದ ಕನ್ನಡಿಯು
ಇಂದು ಸತ್ಯವ ತೆರೆದಿಡಲು ನಿರ್ಧರಿಸಿದೆ
ಮುಂದೊಂದು ದಿನ ಹೀಗಾಗುವುದೆಂದು ತಿಳಿದಿದ್ದರೂ
ಅದನ್ನು ಇಂದೇ ಅರಿಯಲು ಕಸಿವಿಸಿಯಾಗಿದೆ

ಇದುವರೆಗೂ ಚೆಂದವಾಗಿ ಕಂಡಂತ ಮೊಗದಲ್ಲಿ
ಇದ್ದಕ್ಕಿದ್ದಂತೆ ನೆರಿಗೆಗಳು ಎದ್ದು ಕಾಣುತಿವೆ
ಮನಸ್ಸಿನ ಕಣ್ಣಿಗೆ ಅಂಟಿದ್ದ ಪೊರೆಯನ್ನು
ಬಿಳಿಯ ಕೂದಲೆಳೆಯೊಂದು ಕಿತ್ತುಹಾಕಿದೆ

ಕನ್ನಡಿಯನ್ನೇ ಧಿಟ್ಟಿಸುತ್ತಾ ವಯಸ್ಸನ್ನು ಲೆಕ್ಕ ಹಾಕಿದೆ
ಇಷ್ಟು ಬೇಗನೇಕೆ ಬಿಳಿಕೂದಲೆಂದು ಯೋಚಿಸಿದೆ
ಮಕ್ಕಳಾದರೂ ಮದುಮಗನಂತೆ ಇದ್ದ ನನಗೆ
ಯಕಶ್ಚಿತ್ ಕೂದಲೊಂದು ವಯಸ್ಸಾಯಿತೆಂದು ಕೂಗಿ ಹೇಳಿದೆ

ಕತ್ತರಿಸಿ ಪ್ರಯೋಜನವಿಲ್ಲ, ಮತ್ತಷ್ಟು ಹುಟ್ಟುವುದು
ಬಣ್ಣ ಹಚ್ಚಿ ಕಪ್ಪಾಗಿಸಬಹುದು, ಆದರೆ ಶಾಶ್ವತವಲ್ಲ..
ಕಾಲಕ್ಕೆ ಎದುರಾಗಿ, ಇನ್ನೂ ಯೌವನದಲ್ಲಿರುವ ಮನಸ್ಸು
ಈ ಕೂದಲುಗಳನ್ನೇಕೆ ಕಾಲದ ವಶದಿಂದ ಉಳಿಸಲಿಲ್ಲ?
  

ಮೊದಲ ಅಲೆ

ªÀÄgÀĽ£À gÁ²AiÀÄAwzÀÝ fêÀ£ÀzÀ°è
£À«gÁzÀ C¯ÉAiÀÄAvÉ ¤Ã ¥ÀjZÀAiÀĪÁzÉ,
£À£ÉßzÉAiÀÄ ¨sÀÆ«ÄAiÀİ £À¢AiÀiÁV ºÀjAiÉÄAzÀÄ PÉÆÃjzÁUÀ
ªÀÄgÀ½ ¤Ã §zÀÄQ£À ¸ÁUÀgÀ¢ ªÀÄgÉAiÀiÁV ºÉÆÃzÉ.

¤£ÉÆßqÀ¤zÀÝ PÀëtUÀ¼ÀÄ, ¤Ã¤®èzÁUÀ PÀAqÀ PÀ£À¸ÀÄUÀ¼ÀÄ
£À£ÀߣÉßà £À£ÀUÉ ºÉƸÀzÁV ¥ÀjZÀAiÀÄ ªÀiÁr¸ÀvÉÆqÀVzÀªÀÅ,
F C£ÀĨsÀªÀzÀ ºÉ¸ÀgÀÄ ¦æÃwAiÉÄÃ? JAzÀÄ PÉýzÁUÀ
CzÀPÉÌ ¸ÉßúÀzÀ CxÀð PÉÆlÄÖ £ÀUÀÄvÀ ¤AvÉ.

UÉzÁÝUÀ £À£ÉÆßqÀ¤zÉÝ, ¸ÉÆÃvÁUÀ PÉÊ ©qÀzÉ ¤AvÉ
£ÀUÀĪÁUÀ eÉÆvÉAiÀiÁzÉ, C¼ÀĪÁUÀ D¸ÀgÉAiÀiÁzÉ,
EªÉ®èªÀÇ PÀÆrzÀ fêÀ£À¢ eÉÆvÉAiÀiÁUÉAzÀÄ PÉÆÃjzÁUÀ
£À¸ÀÄ£ÀPÀÄÌ, vÀ¯ÉAiÀiÁr¹, MzÉÝUÀtÂ򣃮A¢UÉ PÀtägÉAiÀiÁzÉ.

£À£ÉßzÉAiÀÄ ¨Á«UÉ PÀ®Äè ºÉÆqÉzÀ ªÉÆzÀ®£ÉAiÀĪÀ¼ÀÄ ¤Ã£ÀÄ
¤Ã J©â¹zÀ C¯ÉUÀ¼ÀÄ ¤Aw®è E£ÀÄß,
¤£Àß £ÀAvÀgÀ EtÄQ £ÉÆÃrzÀgÀÄ §ºÀ¼ÀµÀÄÖ ºÀÄqÀÄVAiÀÄgÀÄ
¤£Àß ¥Àæw©A§ªÀ£Éßà C¯ÉAiÀiÁV PÁtÄwºÀgÀÄ.

- gÀWÀÄ£ÀAzÀ£ï

Monday, November 14, 2011

ಮಳೆರಾಯ

¥ÉæÃªÀÄzÀ vÀªÀPÀ¢ PÀ¥ÁàzÀ ¨ÁAzÀ¼ÀªÀÅ
zsÀgÉ0iÀÄAa£À PÀgÉ0iÉÆÃ¯ÉUÉ vÁ ¸É¼ÉzÀÄ ºÉÆÃzÀ
¦æÃwUÉ PÀgÀV ªÀļÉ0iÀiÁV vÁ §gÀ®Ä
ºÀÄZÀÄÑ ªÀÄ£ÀUÀ½UÉ ¦æÃw0iÀÄ QZÀÄÑ ºÀaѹzÀ


¤£Àß £É£À¥À° ºÀÆUÀ¼À£ÀÄ £Á ZÀÄA©¸ÀĪÁUÀ
vÀÄAvÀÄgÀÄ ºÀ¤0iÀiÁV vÁ zsÀgÉUÉ §AzÀ
CUÀ°PÉ0iÀÄ vÁ¥À¢ £Á ¨ÉAzÀÄ ºÉÆÃUÀ®Ä
ªÀÄ¼É ¸ÀÄj¹ , ªÀÄ£À vÀt¹, ¤£ÉÆß®ªÀ vÀAzÀ


ºÀ¤ eÉÆvÉUÉ ºÀ¤ PÀÆr, vÀĸÀÄ ªÉÄ®è£É ªÀÄ¼É §AzÁUÀ
¤£ÉßzÉ0iÀÄ C¥ÀÅöàUÉ0iÀİ G¹gÁqÀÄwvÀÄÛ F ºÀÈzÀ0iÀÄ
ªÀļɬÄAzÀ ¦æÃw0iÉÆÃ, ¦æÃwUÁV ªÀļÉ0iÉÆÃ J£ÀĪÀAvÉ
¤£ÉßzÉ0iÀÄ ¦æÃw0iÀİ «ÄA¢vÀÄÛ £À£Àß ºÀÈzÀ0iÀÄ


£Á¤®è¢gÀĪÁUÀ... £À£Àß ¦æÃw PÁrzÁUÀ
PÀtÚAa£À UÀr zÁn ºÀjzÀAvÀ D ºÀ¤UÀ¼ÀÄ
¤¤ßAzÀ §ºÀÄzÀÆgÀ £Á¤°è ¤AvÀgÀÆ
ªÀļÉ0iÀiÁV, £À£Àߦà, £À£ÉßzÉ0iÀÄ £ÁnzÀªÀÅ


ºÀ¤ PÀAqÀÄ ¤£ÉÆßqÀ£É £É£ÉzÁrzÀ F ªÀÄ£À¸ÀÄ
ªÀÄÄAUÁj£À F ªÀļÉUÀÆ ¨É¸ÀgÀ¢ ¤AwºÀÄzÀÄ
¤£ÉÆßqÀ°£À C¥ÀÅöàUÉ0iÀÄ PÉÆqÀ¯ÁgÀzÀ F ªÀļÉUÉ
J£ÉÆßqÀ®Ä £É£ÉzÀgÀÄ, ªÀÄ£À ºÀwÛ Gj¢ºÀÄzÀÄ


CUÀ°PÉ0iÀÄ C¼À®£ÀÄß E£ÀßµÀÄÖ ºÉaѸÀĪÀ
¥Àæw0iÉÆAzÀÄ ªÀļɺÀ¤0iÀÄÄ J£ï ªÀÄ£ÀPÉ PÀqÀÄ ªÉÊj
J£ÁßPÉ0iÀÄ ¦æÃw0iÀÄ£ÀÄ £Á¤°è C£ÀĨsÀ«¸À®Ä
F ªÀļÉ0iÉÄ £À£ÀVgÀÄªÉ JPÉÊPÀ zÁj


J£ÁßPÉ0iÀÄ £É£À¥À°è £Á ¸ÉÆÃvÀÄ ¤AvÁUÀ
C¥ÀÅöàUÉ0iÀÄ PÁvÀÄgÀ¢ ªÀÄ£À¸ÉÆÃvÀÄ PÀĹzÁUÀ
ªÀļÉgÁ0iÀÄ, J£Àß vÉÆgÉzÀÄ ¤Ã zÀÆgÀ ºÉÆÃUÀ¨ÉÃqÀ
CªÀ¼À ¦æÃw0iÀİ £À£ÀߣÀÄß £É£É¸ÀĪÀÅzÀ ªÀÄgÉ0iÀĨÉÃqÀ

ನನಗೆ ಮದುವೆ ಆಯ್ತು

ಹೊಸಾ ಹೆಂಡ್ತಿ ಬಂದೇಬಿಟ್ಲು
ಹಳೆ ಗೆಳತಿಯರೆಲ್ಲ ಓಡಿಹೊಗಿ
ನಾನೆ ನಿಮ್ನ ಕರೆಯೋವರೆಗು
SILENT ಆಗಿ ಮಾಯ ಆಗಿ


GIFTಉ ಗೊಂಬೆ ನೀವೆ ಇಟ್ಕೊಳಿ
ಪತ್ರಗಳನ್ನ ಸುಟ್ಟು ಹಾಕ್ಬಿಡಿ
ನನ್ನ ಪ್ರೀತಿ ಮನಸ್ಸಿನಲ್ಲಿ ಇರಲಿ
ಬೇರೆ PROOF ಇಟ್ಕೋಬೇಡಿ


ಪ್ರೀತಿಯ SMSಗಳನ್ನು DELETE ಮಾಡ್ಬಿಡಿ
ನನಗೆ ಮತ್ತೆ SMS ಮಾಡ್ಲೇಬೇಡಿ
TIME ಬಂದಾಗ ನಾನೆ CALL ಮಾಡ್ತೀನಿ
ಸಧ್ಯಕ್ಕೆ ನನ್ನ ನಂಬರ್ DELETE ಮಾಡ್ಬಿಡಿ


ನಾನು ಕೊಟ್ಟ ಮಾತುಗಳೆಲ್ಲಾ
ಒಂದು ಕೆಟ್ಟ ಕನಸು ಅಂದುಕೊಳ್ಳಿ
ಮಾತು ಬಿಟ್ಟು ಬೇರೆ ಕೊಟ್ಟಿದ್ರೆ
ಎಲ್ಲಾ ಪಾಂಡುರಂಗನ ಲೀಲೆ ಅಂದುಕೊಳ್ಳಿ


ನಾನು ಒಬ್ಬನೆ ಕಾಣಿಸ್ಕೊಂಡ್ರೆ
ಹತ್ರ ಬಂದು ಮಾತಾಡ್ಬಹುದು
ಹೆಂಡ್ತಿ ಜೊತೆ ಇದ್ದಾಗ್ ಮಾತ್ರ
SILENT ಆಗಿ ಸುಮ್ನೆ ಹೋಗಿ


ಕೃಷ್ಣನ ಹಾಗೆ ಇದ್ದೆ ಮೊದ್ಲು
ರಾಮನ ತರ ಇರ್ಬೇಕ್ ಇನ್ನು
ರಾಮಕೃಷ್ಣರ ಆಣೆ ಮಾಡಿ ಹೇಳ್ತಿನಿ
ನಿಮ್ ಪ್ರೀತಿ ನನ್ ಮನಸ್ಸಿನಲ್ಲೇ ಇರುತ್ತೆ, ನೀವು ಮಾತ್ರ ದೂರ ಇರಿ


ನನ್ನಾಕೆ

ಬೇಟೆಗಾರನ ಕಂಡು ಹೆದರಿದ ಹರಿಣಿಯಂತೆ
ನಿನ್ನ ಕಂಗಳು ಎನ್ನ ಕಂಡು ಹೆದರುತಿವೆಯೇಕೆ,
ಆ ಕಂಗಳಲ್ಲಿ ಕಲೆತು ಹೋಗಿರುವ ಎನ್ನೆದೆಯು
ನಿನಗಾಗಿ ಉಸಿರಾಡುವುದು ನಿನಗೆ ತಿಳಿಯದೇಕೆ.....



 ಎನ್ನ ಕಂಡು ನಸುನಾಚಿ ನಿಂತ ನೀರೆ
ಎನ್ನೆಡೆಗೆ ಬರಲು ಮನದಿ ಸಂಕೋಚವೇಕೆ,
ಒಳ ಕೋಣೆ ಕದವ ಬಳ್ಳಿಯಂತಪ್ಪಿದವಳೆ
ಕದ ತೆರೆದು ಬಳಿ ಬರಲು ಆ ತವಕವೇಕೆ.....



 ನಾನಿರುವಾಗ ಎನ್ನೆಡೆಗೆ ತಿರುಗದ ಆ ಕಂಗಳು
ನಾ ಬರಲು ತಡವಾದರೆ ಹೆದರಿ ನಡುಗುವುದೇಕೆ,
ನಾನಿರದಾಗ ನನ್ನರುಸುವ ಆ ಕಂಗಳು
ನಿನ್ನೆದುರು ಬಂದಾಗ, ಕಣ್ಣಾಮುಚಾಲೆಯಾಡುವುದೇಕೆ.......


 ನಾಚಿಕೆಯೇ ರೂಪ ಹೊತ್ತು ನಿಂತಂತೆ
ನಿನ್ನ ಮೊಗವು ಕೆಂದಾವರೆಯಂತೆ ಅರಳಿರುವುದೇಕೆ,
ನಿನ್ನರಸಿ ಬಹುದೂರ ಬಂದಿರುವ ಈ ದುಂಭಿಗೆ
ಕಾಯಿಸಿ ಖುಶಿ ಪಡುವ ಆಸೆ, ಕಮಲೆ ನಿನಗೇಕೆ..........


 ಧರೆಯ ರಹಸ್ಯವೆಲ್ಲಾ ಒಳಗೆ ಬಚ್ಚಿಟ್ಟ ಹಾಗೆ
ಆ ನಿನ್ನ ತುಟಿಗಳು ಪರಸ್ಪರ ಅಪ್ಪಿವೆಯೇಕೆ,
ನಿನ್ನೆದೆಯ ಬಾಗಿಲಲಿ ನಿಂತಿರುವ ಎನ್ನೊಡನೆ
ತುಟಿ ಬಿಚ್ಚಿ ಸ್ವರಧಾರೆ ಹರಿಸಲು ನಾಚಿಕೆಯೇಕೆ.......


 ಮನದೊಳೆನಗೆ ಕವಿತೆ ಬರೆದು ಹಾಡುವ ನೀರೆಯೆ
ಎನ್ನೊಡನಿರುವಾಗ ಬಾನಂಚಿನ ಈ ಮೌನವೇಕೆ,
ಮನದೊಳಗೆ ಬಂದಿಸಿಹ ಪ್ರೀತಿಯ ಹಕ್ಕಿಗಳ
ಬಾಯ್ತೆರೆದು ಎನ್ನೆಡೆಗೆ, ಕೊಂಚ ಹಾರಿಸಬಾರದೇಕೆ......


 ಮೌನದಾ ಮಳೆಯಲ್ಲಿ ಮಿಂದಿರುವೆ ನಾನು
ಮಾತಿನಾ ಸೆರಗಿನಲ್ಲಿ ನನ್ನೊರೆಸಬಾರದೇಕೆ,
ಚೆಲುವೆ, ನಾ ಹೊರಟು ನಿಂತಿರುವೆ
ನನ್ನೊಡನೆ ಕುಳಿತು ನೀ ತುಸು ಮಾತಾಡಬಾರದೇಕೆ.......


 ಬಾಗಿಲೆಡೆಗೆ ತೆರಳಲು ನಾನೆದ್ದು ನಿಂತಾಗ
ಬಾಯ್ತೆರೆದು ನನಗಾಗಿ ನಸುನಾಚಿ ನುಡಿದಳಾಕೆ,
ಕಾತುರದಿ ನನ್ನ ನೋಡಿ, ಧರೆಯೆಡೆಗೆ ಮುಖ ಮಾಡಿ
"ಮತ್ತೆಂದು ಬರುವಿರಿ?" ಎಂದೆನ್ನ ಕೆಳಿದಳಾಕೆ........

ನದಿ

ಈ ಮನಸು ನದಿಯ ಹಾಗೆ
ಸಾಗರವ ಸೇರುವೆ ತವಕದಿ ಓಡುತಿಹುದು
ಇದ ನೀ ತಡೆಯುವ ದಡವಾಗಬೇದ
ಪ್ರೀತಿಯಲ್ಲಿ ನನ್ನನು ಕಟ್ಟಲು ಯತ್ನಿಸಬೇಡ



ಎಂದಿನಿಂದಲೊ ಓಡುತಿಹ ಈ ಹೊನಲು
ಕ್ಷಣಮಾತ್ರ ಪ್ರೀತಿಗಾಗಿ ನಿಲುಕದು
ಚಿನ್ನದಂತಹ ಭೂಮಿಯಲಿ ಹರಿದು ಬಂದಿಹುದು
ನಿನ್ನ ಚಿನ್ನದ ತುಣುಕುಗಳ ಕಂಡು ನಿಧಾನಿಸದು



ನಾ ಸೇರಬೆಕಾದ ಕಡಲು ನೀನಲ್ಲ
ನಾ ನಿಲ್ಲುವಂತಹ ದಡ ನೀನಲ್ಲ
ಒಲ್ಲದ ಈ ಮನಸಿಗೆ ಬಲೆ ಬೀಸಿ
ದಡ ಸೇರಿಸುವ ಪ್ರೀಥಿಯೂ ನಿನ್ನದಲ್ಲ



ನಾ ಹರಿದು ಬಂದ ದಾರಿಯಲಿ ಕುಂತ ದಡಗಳೆಶ್ಟೋ
ನನ್ನೆದೆಯಲಿ ಈಜಿ ಕುಣಿದ ಮೀನುಗಳೆಶ್ಟೋ
ಕುಣಿದ ಮೀನುಗಳಿಗೆ, ಜೊತೆ ಕೊಟ್ಟ ದಡಗಳಿಗೆ ಸಂಗಾತಿಯಾದರೆ
ನಿನ್ನ ಸಂದಿಸುವ ಮೊದಲೇ ಬತ್ತಿಹೊಗಿರುವಳು ಈ ನೀರೆ



ನನ್ನ ಹಿಡಿದಿಡುವ ಆಸೆಯನು ಕೈಬಿಡು
ಶರಧಿಯೆಡೆಗೆ ನನ್ನನು ನಗುತ ಬೀಳ್ಕೊಡು
ನಾ ಹರಿಯಬೆಕಾದ ದಾರಿ ಬಹಳಶ್ಟಿದೆ
ಕುಂತು ಮಾತನಾಡುವ ಸಮಯ ಎಲ್ಲಿದೆ



ಸಾಗರದಿ ಒಂದಾಗುತ ನಾ ಉಪ್ಪಾಗುವೆ
ನನ್ನ ನೆನಪಿಗೆ ಸಿಹಿಯನ್ನು ನಿನ್ನಲ್ಲೇ ಬಿಟ್ಟು ಹೋಗುವೆ
ನನ್ನ ಅಗಲಿಕೆಯ ಕ್ಷಣಗಳು ನಿನಗೆ ಸಿಹಿಯಾಗಿರಲಿ
ಉಪ್ಪಿನಂಗಳದಲ್ಲೂ ನಿನ್ನ ಸ್ನೇಹದ ನೆನಪು ನನಗೆ ಸಿಹಿಯಾಗಿರಲಿ